Monday, February 22, 2010

ನೀನೆಂದು ಬರುವೆ



ಕಣ್ಣರೆಪ್ಪೆಗಳಡಿ ಕಾದು ಕುಳಿತಿದೆ ಸಾವು
ಕಣ್ಗೊಂಬೆಯಲ್ಲಿರುವ ನೀನು
ಓ ಗೆಳೆಯಾ,ಕಾಲ ಜಾರಿ ಹೋಗುವ ಮುನ್ನ
ಕಣ್ಣೆರಡ ಮಿಟುಕಿಸದೆ ಕಾದಿರುವೆ
ನೀನೆಂದು ಬರುವೆ...........

ಸವಿ ನೆನಪು



ನಿನ್ನೊಂದಿಗೆ ಕಳೆದ ಆ ಸವಿನೆನಪು
ಈ ತನಕ ಕ್ಷಣ ಬಿಡದೆ ಕೊರೆಯುವುದೆಂದು
ತಿಳಿದಿರಲಿಲ್ಲ ಗೆಳಯಾ..........
ಕೈ ಜಾರಿದ ಮುತ್ತಿನ ಬೆಲೆಯ,
ಬಾಯಿ ತಪ್ಪಿದ ತುತ್ತಿನ ರುಚಿಯ,
ನಾನರಿತೆ ನೀ ನನ್ನ ಬಿಟ್ಟು ಹೋದ ಮೇಲೆ.

ಪ್ರೀತಿ.....




ಏನೂ ಅರಿಯದ ನನ್ನ ಜೀವನದ,
ಆ ಗಳಿಗೆಯಲ್ಲಿ ನಡೆದ ಕಹಿಕ್ಷಣದಿಂದ,
ನಾ ಪಣ ತೊಟ್ಟಿದ್ದೆ ನನ್ನದೇ ಹಿತದಿಂದ,
ಪ್ರೀತಿಯನ್ನರಸಿ ಹೋಗಲಾರೆನೆಂದು,
ಅದರ ಬಲೆಗೆ ಬೀಳಲಾರೆನೆಂದು,
ಆದರೆ, ಓ ಪ್ರಿಯಾ.................
ನೀ ನನ್ನ ಮನ ಸೋಲಿಸಿಬಟ್ಟೆ,
ಹತ್ತಿರ ಬಂದ ನಿನ್ನ ದೂರ ಮಾಡಬಯಸಿದೆ,
ಪ್ರೀತಿ ಎರೆಯಲು ಬಂದ ನಿನ್ನ ಸಂಶಯಿಸಿದೆ,
ನಿನ್ನಲ್ಲೇ ಹೇಳಿದೆ ಪ್ರೀತಿ ಲೊಟ್ಟೆಯ ಪರದೆ,
ಬರಿ ನೋವಿನ ವಿಷವನ್ನುಣಿಸುವುದೆಂದೆ,
ನೀಲಾಗಸವನ್ನ ತೋರಿಸಿ ಕೂಪಕ್ಕೆ ನೂಕುವುದೆಂದೆ,
ಆದರೆ, ಓ ಪ್ರಿಯಾ.................
ನೀ ನನ್ನ ಮನ ಸೋಲಿಸಿಬಟ್ಟೆ,
ಹುಸಿ ಪ್ರೀತಿಯ ಮೋಸವನ್ನರಿತ ನನ್ನೆದೆ
ತುಂಬಾ ಹಸಿ ಪ್ರೀತಿಯ ರಸವನ್ನೆರೆದೆ,
ನೋವಿನ ಬೇಗೆಯಲ್ಲಿ ಬೆಂದ ಈ ಮನಕೆ
ಸುಖದ ಸಿಹಿ ಮಳೆಯನ್ನೇ ಸುರಿದೆ,
ಸಿಹಿ ಕಡಲಿನಲಿ ಹೃದಯಾನ ತೇಲಿಸಿದೆ,
ಆದರೆ, ಓ ಪ್ರಿಯಾ.................
ನೀ ನನ್ನ ಮನ ಸೋಲಿಸಿಬಿಟ್ಟೆ .

ಬಾಲ್ಯ-ಹರೆಯ-ಮುದಿತನ


ಬಾಲ್ಯ: ಆಡುತ್ತಾ ಚೆಲ್ಲಾಟವಾಡುತ್ತಾ
ಪುಟ್ಟ ಹೆಜ್ಜೆಗಳನಿಡುತ್ತಾ
ಆಟ-ಪಾಟವ ನೋಡುತ್ತಾ
ಕೆಲ ದಶಕಗಳ ಕಳೆವಾಗ
ಮೆಲ್ಲನುಸಿರಿತು "ಹರೆಯ"
ನಾ ನಿನ್ನ ಬಳಿ ಬರುವೆನೆಂದು
ಹರೆಯ:ಅರಸಿ ಬೆಳೆಸಿ ಉಳಿಸಿ
ಮತ್ತೆ ಕೆಲವು ಶತಕಗಳ ಸವೆಸಿ
ಇಟ್ಟ ಹೆಜ್ಜೆಯ ಹಿಂದೆಗೆಯಲಾರೆನೆನ್ನುವ
ದಿಟ್ಟ ನಡೆಗೆ ವಿಶ್ರಾಂತಿ ಇಲ್ಲಿಹುದೆನ್ನುತ
ಕೂಗಿ ಕರೆಯಿತು "ಮುದಿತನ"
ಮುದಿತನ: ಶಾಂತಿ, ವೀರಶಾಂತಿ ಇಲ್ಲಿಹುದು
ಮೇಲೆರಲಾರೆ ಹಿಂದೆ ಸರಿಯಲಾರೆ
ಯಾರ ಕೂಗಲಿ ನಾನು
ಯಾರು ಕರೆಯುವರು ನನ್ನ
ಇಹಲೋಕವಲ್ಲದೆ " ಅಲ್ಲಿಹುದು"
ಆತ್ಮ ಶಾಂತಿಯ ನೆಲ.